ಮೊಟ್ಟ ಮೊದಲಿಗೆ ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಈ ಘಟನೆಯತ್ತ ಒಮ್ಮೆ ಕಣ್ಣು ಹಾಯಿಸೋಣ – ಸ್ವಾಮೀಜಿಯವರು ಗೋಪಾಲಲಾಲ್ ಸೀಲರ ಉದ್ಯಾನಗೃಹದಲ್ಲಿದ್ದಾಗ ಒಮ್ಮೆ ಕೆಲವು ಗುಜರಾತೀ ಪಂಡಿತರು ಅಲ್ಲಿಗೆ ಬಂದರು. ವೇದವೇದಾಂಗಗಳಲ್ಲಿ ಪಾರಂಗತರಾದ ಈ ಪಂಡಿತರು ಸ್ವಾಮೀಜಿಯವರೊಂದಿಗೆ ಶಾಸ್ತ್ರವಿಚಾರಗಳ ಚರ್ಚೆ ಮಾಡಲು ಬಂದಿದ್ದರು. ಇವರು ಸಂಸ್ಕ್ರತದಲ್ಲಿ ಚರ್ಚೆಯನ್ನು ಪ್ರಾರಂಭಿಸಿದರು. ಸ್ವಾಮೀಜಿ ತಮ್ಮೊಂದಿಗೆ ಸಂಸ್ಕ್ರತದಲ್ಲಿ ವ್ಯವಹರಿಸಬಲ್ಲರೇ ಎಂಬುದನ್ನು ಬಯಲಿಗೆಳೆದು ತಮಾಷೆ ನೋಡುವುದು ಇವರ ಒಳ ಉದ್ದೇಶ. ಆದರೆ ಸ್ವಾಮೀಜಿ ಶಾಂತವಾಗಿ ಸಂಸ್ಕ್ರತದಲ್ಲಿ ನಿರರ್ಗಳವಾಗಿ ಸಂಭಾಷಿಸತೊಡಗಿದರು. ಇದನ್ನು ಕಂಡು ಅಲ್ಲಿದ್ದ […]Read More
ವೀರಶೈವಧರ್ಮದ ಪ್ರಾಚೀನತೆಯನ್ನು ಐತಿಹಾಸಿಕ ಆಧಾರಗಳಿಂದ ಕೂಡ ಅರಿಯಬಹುದಾಗಿದೆ. ಭಾರತದ ಅತ್ಯಂತ ಪ್ರಾಚೀನ ಸಂಸ್ಕೃತಿಯೆಂದು ಪ್ರಸಿದ್ದವಾದ ಸಿಂಧುಕೊಳ್ಳದ ಸಂಸ್ಕೃತಿ ಅಥವಾ ಹರಪ್ಪಾ – ಮೊಹೆಂಜೋದಾರೋ ಸಂಸ್ಕೃತಿಯ ಉತ್ಖನನದಲ್ಲಿ ದೊರೆತ ಹಲವಾರು ಪಳೆಯುಳಿಕೆ, ರೇಖಾಚಿತ್ರಗಳ ಮೂಲಕ ಆ ಸಂಸ್ಕೃತಿಯಲ್ಲಿ ಶೈವಧರ್ಮವು ಪ್ರಧಾನವಾಗಿ ಆಚರಿಸಲ್ಪಡುತ್ತಿತ್ತು ಎಂಬ ವಿಷಯವು ತಿಳಿದು ಬರುತ್ತದೆ. ಶೈವ ಹಾಗೂ ವೀರಶೈವ ಕುರುಹುಗಳಾದ ರುದ್ರ – ಶಿವ – ಪಶುಪತಿಗಳ ಮೂಲವು ಸಿಂಧೂಕೊಳ್ಳದ ಸಂಸ್ಕೃತಿಯಲ್ಲಿ ದೊರೆಯುತ್ತವೆ. ಯಜುರ್ವೇದ ಕಾಲದಲ್ಲಿ ಬೆಳೆದು ನಿಂತಿದ್ದ ರುದ್ರ – ಶಿವ ಸಂಸ್ಕೃತಿಯಲ್ಲಿ […]Read More
ವೀರಶೈವ ಅಷ್ಟಾವರಣಗಳಲ್ಲಿ ಮೊದಲನೇಯ ಆವರಣವೇ ಗುರು. ಧರ್ಮದ ಆಚಾರ ವಿಚಾರಗಳೆರಡಕ್ಕೂ ಶ್ರೀ ಗುರುವೇ ಮಾರ್ಗದರ್ಶಕನಾಗಿರುತ್ತಾನೆ. ಪೂಜ್ಯನೀಯ ಆವರಣಗಳೆಂದು ಪರಿಗಣಿಸಲ್ಪಡುವ ಗುರು, ಲಿಂಗ ಮತ್ತು ಜಂಗಮಗಳಲ್ಲಿಯೂ ಗುರುವೇ ಪ್ರಥಮ. ವೇದ, ಮನು ಮತ್ತು ಕ್ರಿಯಾದೀಕ್ಷೆಯ ಮೂಲಕ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳಿಗೆ ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳನ್ನು ಪಡೆದುಕೊಂಡು ಆಣವ, ಮಾಯೀಯ ಮತ್ತು ಕಾರ್ಮಿಕಗಳೆಂಬ ತ್ರಿಮಲಗಳಿಂದ ದೂರನಾಗುತ್ತಾನೆ. ಹರ ಮುನಿದರೂ ಗುರು ಕಾಯುತ್ತಾನೆಂಬ ನಂಬಿಕೆ ವೀರಶೈವರಲ್ಲಿದೆ. ಈ ಮಾತಿಗೆ ಪುಷ್ಟಿ ಕೊಡುವಂತೆ ಚಂದ್ರಜ್ಞಾನಗಮವು ಹೀಗೆ ಹೇಳುತ್ತದೆ – […]Read More
ವೀರಶೈವ ದರ್ಶನ : ಅರ್ಥಾತ್ “ಶಕ್ತಿ ವಿಶಿಷ್ಟಾದ್ವೈತ” ಸಿದ್ಧಾಂತದ ವೇದೋಕ್ತತೆ
ವೀರಶೈವಮತವು ಅತ್ಯಂತ ಪ್ರಾಚೀನವಾದ ಭಾರತೀಯ ದಾರ್ಶನಿಕ ಪರಂಪರೆಯಲ್ಲೊಂದು. ಇತರೆ ಶೈವಧರ್ಮದ ಪ್ರಭೇದಗಳಂತೆಯೇ ತನ್ನದೇ ಆದ ವಿಶೇಷ ತತ್ವಾಚರಣೆಗಳಿಂದ ಶ್ರೇಷ್ಠವಾಗಿದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲದಂಥಹ ವಿಶಿಷ್ಟವಾದ ಸಾಧನಾಮಾರ್ಗಗಳಿಂದ ಕೂಡಿದೆ. ತಮ್ಮ ಶರೀರದ ಮೇಲೆ ಧರಿಸುವ ಇಷ್ಟಲಿಂಗದ ತಾತ್ವಿಕತೆಯಿಂದ ವೀರಶೈವರು ವಿಭಿನ್ನರಾಗಿ ಮತ್ತು ವಿಶೇಷವಾಗಿ ನಿಲ್ಲುತ್ತಾರೆ. ಶರೀರದ ಮೇಲಿನ ಪರಮಾತ್ಮಸ್ವರೂಪವಾದ ಇಷ್ಟಲಿಂಗಧಾರಣೆ , ಹಸ್ತ ಪೀಠದ ಮೇಲೆ ಇಷ್ಟಲಿಂಗವನ್ನಿರಿಸಿ ಪೂಜಿಸುವ ಪದ್ದತಿಗಳು ಯುಗಯುಗಾಂತರಗಳ ಐತಿಹಾಸಿಕತೆಯನ್ನು ಪ್ರತಿನಿಧಿಸುತ್ತವೆ. ಅಷ್ಟೇ ಅಲ್ಲದೆ ವೇದ, ಆಗಮ, ಪುರಾಣ ಮತ್ತು ಇತಿಹಾಸಗಳ ಪುಟಗಳೂ ಸಹ […]Read More
“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭೂತಲೇ | ತದಾ ತದಾವತಾರೋಯಂ ಗಣೇಶಸ್ಯ ಮಹೀತಲೇ || ಸ್ಕಂದಪುರಾಣದ ಈ ಪ್ರಮಾಣವಚನವೇ ಹೇಳುವಂತೆ ಎಂದು ಧರ್ಮಕ್ಕೆ ಅಪಾಯವೆದುರಾಗುತ್ತದೋ ಆಗೆಲ್ಲ ಭಗವಾನ್ ಈಶ್ವರ ತಮ್ಮದೇ ವಿಶೇಷ ಅಂಶವುಳ್ಳ ಶಿವಗಣಗಳ ರೂಪದಲ್ಲಿ ಅವತರಿಸಿ ಪ್ರತ್ಯೇಕ ಯುಗಗಳ ಆರಂಭದಲ್ಲಿ ಧರ್ಮ ಸ್ಥಾಪನೆಯನ್ನು ಮಾಡುತ್ತಾರೆ. ಅಂತೆಯೇ ಐದು ಆಚಾರ್ಯರು ಸನಾತನ ವೀರಶೈವ ಧರ್ಮದ ಸಂಸ್ಥಾಪಿಸಿದ್ದಾರೆ. ಶಿವನ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಮುಖಗಳ ರೂಪದಲ್ಲಿ ವಿರಾಜಮಾನರಾಗಿಹ ಕೊಲ್ಲಿಪಾಕದ ಶ್ರೀ ಸೋಮೇಶ್ವರ ಲಿಂಗ, […]Read More
“ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ”. ಯಾರು ಧರ್ಮವನ್ನು ರಕ್ಷಿಸುತ್ತಾರೋ , ಧರ್ಮ ಅವರನ್ನು ರಕ್ಷಿಸುತ್ತದೆ. ಯಾರು ಧರ್ಮವನ್ನು ನಾಶಮಾಡಲೆತ್ನಿಸುತ್ತಾರೋ ಧರ್ಮ ಅವರನ್ನು ನಾಶ ಮಾಡುತ್ತದೆ ಎಂದರ್ಥ. ಹಾಗಿದ್ದಲ್ಲಿ ಈ “ಧರ್ಮ” ಎಂದರೇನು? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. “ಧಾರಯತಿ ಇತಿ ಧರ್ಮ” ಯಾವುದು ಎಲ್ಲವನ್ನೂ ತಾಳುವಂತಹುದೋ ಮತ್ತು ಆಧಾರಸ್ವರೂಪವಾಗಿ ನಿಲ್ಲುವುದೋ ಅದೇ ಧರ್ಮ. ದೇಶ ಕಾಲಗಳನ್ನು ಮೀರಿ ‘ಋತ ಸಂಚಲನವನ್ನು'(ಬ್ರಹ್ಮಾಂಡ ಚಲನೆಯನ್ನು) ಸರಿಯಾಗಿ ನಿಭಾಯಿಸುವಲ್ಲಿ ಸಹಾಯ ಮಾಡಬಲ್ಲ ನಿಯಮಿತ ಸೂತ್ರ […]Read More
ಮೊಟ್ಟ ಮೊದಲಿಗೆ ಸ್ವಾಮೀ ವಿವೇಕಾನಂದರ ಈ ಉಪನ್ಯಾಸದತ್ತ ಒಮ್ಮೆ ಕಣ್ಣು ಹಾಯಿಸೋಣ – ವಿಷಯ; ಭಾರತೀಯ ಜನಜೀವನದಲ್ಲಿ ವೇದಾಂತದ ಅನುಷ್ಠಾನ. ಮೊದಲಿಗೆ ಸ್ವಾಮೀಜಿ ಹಿಂದೂ ಎಂಬ ಶಬ್ದದ ವ್ಯುತ್ಪತ್ತಿಯನ್ನು ವಿವರಿಸಿದರು. ಸಿಂಧೂ ನದಿಯ ಬಲಭಾಗದಲ್ಲಿದ್ದವರನ್ನೆಲ್ಲ ಪುರಾತನ ಪರ್ಷಿಯನ್ನರು ಹಿಂದೂಗಳು ಎಂದರು. ಗ್ರೀಕರು ಈ ಹಿಂದೂಗಳನ್ನು ಇಂಡಿಯಾದವರು ಎಂದು ಕರೆದರು. ಆದ್ದರಿಂದ ಹಿಂದೂ ಎಂಬ ಶಬ್ದಕ್ಕೆ ಈಗ ಯಾವುದೇ ಅರ್ಥವಿಲ್ಲ ಎಂದರು ಸ್ವಾಮೀಜಿ. ಆದರೆ ಆ ಪದವು ಬಳಕೆಗೆ ಬಂದಾಗಿರುವುದರಿಂದ ಅದನ್ನೇನೂ ಈಗ ತಿರಸ್ಕರಿಸಬೇಕಾಗಿಲ್ಲ ಎಂದು ಸ್ಪಷ್ಟ ಪಡಿಸಿದರು. […]Read More
“ಶೈವತಂತ್ರಮಿತಿ ಪ್ರೋಕ್ತಮ್ ಸಿದ್ಧಾಂತಾಖ್ಯಂ ಶಿವೋದಿತಂ| ಸರ್ವವೇದಾರ್ಥ ರೂಪತ್ವಾತ್ ಪ್ರಾಮಾಣ್ಯಂ ವೇದವತ್ ಸದಾ || ವೇದಧರ್ಮಾಭಿಧಾಯಿತ್ವಾತ್ ಸಿದ್ಧಾಂತಾಖ್ಯಃ ಶಿವಾಗಮಃ| ವೇದಬಾಹ್ಯಾವಿರೋಧಿತ್ವಾದ್ ವೇದಸಮ್ಮತ ಉಚ್ಯತೇ || ವೇದಸಿದ್ಧಾಂತಯೋರೈಕ್ಯಮೇಕಾರ್ಥಪ್ರತಿಪಾದನಾತ್ | ಪ್ರಾಮಾಣ್ಯಂ ಸದೃಶಂ ಜ್ಞೇಯಂ ಪಂಡಿತೈರೇತಯೋಃ ಸದಾ || ಸಿದ್ಧಾಂತಾಖ್ಯೇ ಮಹಾತಂತ್ರೇ ಕಾಮಿಕಾದ್ಯೇ ಶಿವೋದಿತೇ| ನಿರ್ದಿಷ್ಟಮುತ್ತರೇಭಾಗೇ ವೀರಶೈವಮತಂ ಪರಂ ||” ಮಹರ್ಷಿ ಅಗಸ್ತ್ಯ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ನಡುವಿನ ಸಂವಾದದ ರೂಪದಲ್ಲಿರುವ ಶ್ರೀ ಸಿದ್ಧಾಂತ ಶಿಖಾಮಣಿಯ ಈ ಶ್ಲೋಕಗಳಲ್ಲಿ ಭಸ್ಮ, ರುದ್ರಾಕ್ಷ, ಲಿಂಗಧಾರಣೆಯಂತಹ ಸಿದ್ಧಾಂತಗಳನ್ನು ಪ್ರತಿಪಾದಿಸಿರುವ ಕಾರಣಾರ್ಥವಾಗಿ ಮತ್ತು ಜೈನ, […]Read More